ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ವೀರಭದ್ರೇಶ್ವರ ಜಯಂತೋತ್ಸವ ಆಚರಣೆ

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ವೀರಭದ್ರೇಶ್ವರ ಜಯಂತೋತ್ಸವ ಆಚರಿಸಲಾಯಿತು.

ದೇವರ ಹಿಪ್ಪರಗಿ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ವೀರಭದ್ರೇಶ್ವರ ಜಯಂತೋತ್ಸವ ಆಚರಿಸಲಾಯಿತು.

ಜಯಂತ್ಯೋತ್ಸವ ಸಂದರ್ಭದಲ್ಲಿ ಸ್ಥಳೀಯ ಗಂಗಾಧರ ಶ್ರೀಗಳು, ಪರದೇಶಿ ಮಠದ ಶ್ರೀಗಳು ಆಶೀರ್ವಚನ ನೀಡಿದರು, ದೇವಸ್ಥಾನ ಆಡಳಿತ ಮಂಡಳಿಯ ಮುಖ್ಯಸ್ಥ ಸಿ. ಕೆ. ಕುದರಿ ಈ ಸಂದರ್ಭದಲ್ಲಿ ಮಾತನಾಡಿ, ಶ್ರೀ ವೀರಭದ್ರೇಶ್ವರ ಜಯಂತೋತ್ಸವದ ಹಿನ್ನಲೆ, ವೀರಭದ್ರೇಶ್ವರನ ಅವತಾರ ವಿಶ್ವ ರೂಪಿಯಾಗಿದೆ ಎಂದ ಅವರು ಅಂಜನಿ ಪುತ್ರ ಹನುಮನಿಗೆ ಲಿಂಗ ಧಾರಣೆ ಮಾಡಿದ ಶ್ರೀ ವೀರಭದ್ರ ದೇವರು ಇಡೀ ಮನುಕುಲಕ್ಕೆ ಬೆಳಕಾಗಿದ್ದಾರೆ ಎಂದರು. ಇದೇ ವೇಳೆ ಬರುವ ದಿನಗಳಲ್ಲಿ ದೇವರ ಹಿಪ್ಪರಗಿ ಪಟ್ಟಣದಲ್ಲಿ ಶ್ರೀ ವೀರಭದ್ರ ದೇವರ ಜಯಂತಿ ತಾಲೂಕ ಮಟ್ಟದಲ್ಲಿ ಅರ್ಥ ಪೂರ್ಣವಾಗಿ ಆಚರಿಸಲು ಶ್ರೀಗಳು ಸಲಹೆ ನೀಡಿದರು.

 

ವರದಿ : ಮಹೇಬುಬ್ ಗುಂತಕಲ್