ಸಾರಿಗೆ ಬಸ್ ಮತ್ತು ಶಾಲಾ ವಾಹನ ನಡುವೆ ಮುಖಾಮಖಿ ಒಂದು ಮಗು ಸಾವು, ನಾಲ್ವರ ಕಾಲು ಕಟ್ ಹಲವು ವಿದ್ಯಾರ್ಥಿಗಳಿಗೆ ಗಂಭೀರ ಗಾಯ ಶಿಕ್ಷಕರ ದಿನಾಚರಣೆಯ ದಿನವೇ ಮನಕಲುಕುವ ಘಟನೆ

ಬೆಳಂ ಬೆಳಗ್ಗೆ ಶಾಲಾ ಮಕ್ಕಳನ್ನು ಮನೆಯಿಂದ ಕರೆದುಕೊಂಡು ಹೋಗುತ್ತಿರುವ ವಾಹನ ಹಾಗೂ ಸಾರಿಗೆ ಬಸ್ ನಡುವೆ ಮುಖಾ ಮುಖಿ ಡಿಕ್ಕಿ ಯಾಗಿರುವ ಪರಿಣಾಮ ಒಂದು ಮಗು ಸಾವು ಹಾಗೂ 8 ರಿಂದ 10ಮಕ್ಕಳಿಗೆ ಗಂಭೀರವಾಗಿ ಗಾಯ ವಾಗಿದೆ ಎಂದು ತಿಳಿದು ಬಂದಿದೆ ರಾಯಚೂರು ಹಾಗು ಮಾನ್ವಿ ಮಾರ್ಗ ಮಧ್ಯದಲ್ಲಿ ರಾಜಲಬಂಡ ಕ್ರಾಸ್ ಹತ್ತಿರ ಮಾನ್ವಿ ಲಾಯಲ್ ಸ್ಕೂಲ್ ವಾಹನ ಹಾಗೂ ಸರ್ಕಾರಿ ಸಾರಿಗೆ ಬಸ್ಸುಗಳ ಮುಖಾಮುಖಿಯಾಗಿ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ ಒಬ್ಬ ಮಗುವಿನ ಕಾಲ್ ಕಟ್ ಆಗಿ ವಾಹನ ದಲ್ಲಿ ಬಿದ್ದಿದ್ದು ನೋಡುಗರು ಕಣ್ಣೀರು ಇಡುವ ಭಯಾನಕ ಘಟನೆ ನಡೆದು ಹೋಗಿದೆ ತಕ್ಷಣ ವಾಹನ ಸುತ್ತ ಸ್ಥಳೀಯರು ಜಮಾಯಿಸಿದ್ದಾರೆ,

 

ಶಾಲಾ ವಾಹನ ಚಾಲಕರು ಹಾಗೂ ಶಾಲಾ ಆಡಳಿತ ಮಕ್ಕಳನ್ನ ಕರೆದುಕೊಂಡು ಹೋಗುವಾಗ ಹಾಗೂ ಮನೆಗೆ ಬಿಡುವಾಗ ಬಹಳಷ್ಟು ಜಾಗೃತರಾಗಬೇಕಿದ್ದು ಘಟನೆ ಯಲ್ಲಿ ಯಾರದೇ ತಪ್ಪಿರಲಿ ತಂದೆ ತಾಯಿಗಳು ಜೀವ ಕೈಯಲ್ಲಿ ಹಿಡಿದು ತನಗೆ ಪಂಚ ಪ್ರಾಣ ವಾಗಿರುವ ಮಕ್ಕಳನ್ನ ತಮ್ಮ ಜವಾಬ್ದಾರಿಯಾಗಿ ನೀಡುವುದರಿಂದ ತಾವುಗಳು ಮಕ್ಕಳ್ಳನ್ನು ಬಹಳ ಸೂಕ್ಷ್ಮವಾಗಿ ನೋಡಿ ಕೊಳ್ಳಬೇಕೆನ್ನುವುದೇ jk news ಕನ್ನಡದ ಕಳಕಳಿಯಾಗಿದೆ

 

ಸಿದ್ದು ಪಾಟೀಲ್ jk news ಕನ್ನಡ ಮಾನ್ವಿ