ಔರಾದ್ ತಾಲೂಕಿನಲ್ಲಿ ಮಳೆಯಿಂದ ಮನೆ ಹಾನಿಗೀಡಾದ ಪ್ರದೇಶಗಳಿಗೆ ಸಂಸದ ಸಾಗರ್ ಖಂಡ್ರೆ ಅಧಿಕಾರಿ ಗಳೊಂದಿಗೆ ಭೇಟಿ

ಔರಾದ್ ತಾಲ್ಲೂಕಿನಲ್ಲಿ ಸತತ ಆರು ದಿನಗಳಿಂದ ಸುರಿದ ಮಳೆಯಿಂದ ಮಳೆ ಹಾನಿಗೀಡಾದ ಪ್ರದೇಶಗಳಿಗೆ ಸಂಸದ ಸಾಗರ್ ಖಂಡ್ರೆ ಅಧಿ ಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕಿನ ಬಾಚಪಳ್ಳಿ, ನಾಗೂರ್ ಬಿ , ಮಸ್ಕಲ್, ಜೋಜನ, ಗುಡಪಳ್ಳಿ, ಮೇಡಪಳ್ಳಿ, ಕೊಳ್ಳುರ್ ಮತ್ತು ಎಕಲಾರ್ ಭೇಟಿ ನೀಡಿದರು.

ಮಳೆಯ ಹಾನಿಯ ಸಂಪೂರ್ಣ ಮಾಹಿತಿ ಕಲೆ ಹಾಕಿ ಸರ್ಕಾರದಿಂದ ದೊರೆಯುವ ಎಲ್ಲ ರೀತಿಯ ಪರಿಹಾರವನ್ನು ಸಾರ್ವಜನಿಕರಿಗೆ, ರೈತರಿಗೆ ದೊರೆಯುವಂತೆ ನೋಡಿಕೊಳ್ಳಬೇಕು. ಇನ್ನು ಹೆಚ್ಚಿನ ಮಳೆಯಿಂದ ರಸ್ತೆ, ಸೇತುವೆ ಹಾನಿ ಕುರಿತು ಪರಿಶೀಲನೆ ನಡೆಸಿ ಮಾಹಿತಿ ನೀಡಬೇಕು. ಒಟ್ಟಿನಲ್ಲಿ ಸಾಮಾನ್ಯ ಜನರಿಗೆ ಯಾವುದೇ ರೀತಿಯ ಅನಾನುಕೂಲ ಆಗದಂತೆ ನೋಡಿಕೊಳ್ಳಬೇಕು ಎಂದು ಸ್ಥಳದಲ್ಲಿದ್ದ ಅಧಿ ಕಾರಿಗಳಿಗೆ ಸೂಚಿಸಿದರು.