ಶಾಲಾ ಮಕ್ಕಳಿಗೆ ವಿಜ್ಞಾನ ಪೀಠೋಪಕರಣಗಳನ್ನು ನೀಡುವ ಭರವಸೆ ಕೊಟ್ಟ ರಾಮನಗೌಡ ಬಸನಗೌಡ ಪಾಟೀಲ ಯತ್ನಾಳ್

ವಿಜಯಪುರ ನಗರದ ವಾರ್ಡ್ ನಂ : 2 ರಲ್ಲಿ ಸಾಮಾಜಿಕ ಬದುಕಿನಲ್ಲಿದ್ದಾಗ ಸೇವೆಗೆ ದೊರೆಯುವ ಅತಿ ದೊಡ್ಡ ಪ್ರತಿಫಲ ಅಂದರೆ ಬಡ ನಿರ್ಗತಿಕ ಜನರ ಆಶೀರ್ವಾದ. ಕಷ್ಟದಲ್ಲಿದ್ದವರಿಗೆ, ಅವಶ್ಯಕತೆ ಇದ್ದವರಿಗೆ ನಿಮ್ಮ ಕೈಲಾಗುವ ಕೆಲಸ ಕಾರ್ಯಗಳು ಸಹಾಯ ಮಾಡುವುದರಿಂದ ಅವರಿಂದ ನಿಮಗೆ ದೊರೆಯುವ ಆಶೀರ್ವಾದದ ಮಾತುಗಳೇ ನಿಮ್ಮನ್ನು ಇನ್ನಷ್ಟು ಮತ್ತಷ್ಟು ಹೆಚ್ಚು ಹೆಚ್ಚಾಗಿ ಕೆಲಸ ಮಾಡಲು ಪ್ರೇರೇಪಿಸುತ್ತವೆ.

 

ವಿಜಯಪುರ ನಗರದ ಅಫಜಲಪುರ ಟಕ್ಕೆ ಶಾಲೆ ನಂಬರ್ MPS-49 ನಮ್ಮ ಕರೆಗೆ ಒಗಟು ಶಾಲೆಗೆ ಆಗಮಿಸಿ ಶಾಲಾ ಮಕ್ಕಳಿಗೆ ವಿಜ್ಞಾನ ಪೀಠೋಪಕರಣಗಳನ್ನು ನಮ್ಮ ಶಾಲೆಗೆ ನೀಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದು ಕೇಳಿದಾಗ ಧಾರಾಳವಾಗಿ ಪೀಠೋಪಕರಣಗಳನ್ನು ಕೊಡಿಸುವದಾಗಿ ಹೇಳಿದ್ದರು.

 

ನಮ್ಮ ಯುವ ನಾಯಕ ಶ್ರೀ ರಾಮನಗೌಡ ಬಸನಗೌಡ ಪಾಟೀಲ ಯತ್ನಾಳ್ ಅವರು ನಾವು ಯಾವುದೇ ಜನರ ಕೆಲಸ ತೆಗೆದುಕೊಂಡು ಸಣ್ಣ ಗೌಡ್ರ ಹತ್ತಿರ ಹೋದಾಗ ಅದು ಯಾವುದೇ ಕೆಲಸವಿರಲಿ ಪ್ರತಿ ಒಂದಕ್ಕೂ ಸ್ಪಂದಿಸುವ ಕರುಣಾಮಯಿ.

 

ಜನ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುವುದರಲ್ಲಿ ತಂದೆಗಿಂತ ಒಂದು ಕೈ ಮೇಲು ನಮ್ಮ ರಾಮನಗೌಡ್ರು. ನಿಮ್ಮ ಕೊಡುಗೆಗೆ ಮುದ್ದು ವಿದ್ಯಾರ್ಥಿಗಳ ಪರವಾಗಿ ಗ್ರಾಮಸ್ಥರ ಪರವಾಗಿ ನನ್ನ ಕೋಟಿ ಕೋಟಿ ನಮನಗಳು ತಿಳಿಸಿದ್ದರು SDMC ಅಧ್ಯಕ್ಷರು ಯೋಗೇಶ ನಡುವಿನಕೇರಿ ಈ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.

 

ವರದಿ : – ದೌಲಪ್ಪ ಮನಗೂಳಿ