ಬಸ್ ಮತ್ತು ಬುಲೋರೊ ವಾಹನದ ನಡುವೇ ಡಿಕ್ಕಿ, ಸ್ಥಳದಲ್ಲೆ ಚಾಲಕ ಸಾವು.

ಡಿಕ್ಕಿ ರಭಸಕ್ಕೆ ಬಸ್ ಒಳಗೆ ನುಗ್ಗಿದ ಬೋಲೊರೋ ವಾಹನ.

 

ಬಸ್ ಮತ್ತು ಬುಲೋರ‌ ವಾಹನ‌ದ ನಡುವೇ ಮುಖಾಮುಖಿ ಡಿಕ್ಕಿಯಾಗಿ ಬೊಲೊರೋ ವಾಹನ ಚಾಲಕ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದೆಪಲ್ಲಿ ಕ್ರಾಸ್ ಬಳಿ ಮಂಗಳವಾರ ಬೆಳಿಗ್ಗೆ ನಡೆದಿದೆ.

 

ಮಂಗಳವಾರ ಬೆಳಿಗ್ಹೆ ಚಿಂತಾಮಣಿ ಯಿಂದ‌ ಚೇಳೂರು ಬಾಗೇಪಲ್ಲಿ ಗೆ ಹೋಗುವ ವಿಜಯಲಕ್ಷ್ಮಿ ಬಸ್ ಗೆ ಆಂದ್ರ ಕಡೆಯಿಂದ ಟೊಮೇಟೊ ಲೋಡ್ ಹಾಕಿಕೊಂಡು‌ಬರುತ್ತಿದ್ದ ಬುಲೋರ ವಾಹನ ರಾಂಗ್ ರೂಟ್ ನಲ್ಲಿ‌ ಬಂದು ಬಸ್ ಗೆ ಡಿಕ್ಕಿ‌ಹೊಡೆದಿರವುದೇ ಅಪಘಾತಕ್ಕೆ ಕಾರಣವೆಂದು ತಿಳಿದು‌ಬಂದಿದೆ.

 

ಅಪಘಾತದಲ್ಲಿ ಮೃತಪಟ್ಟ ಬೊಲೋರೋ ವಾಹನ ಚಾಲಕ ಬಾಗೇಪಲ್ಲಿ ತಾಲ್ಲೂಕಿನ ಶಿವಪುರ ಗ್ರಾಮದ ರೆಡ್ಡಪ್ಪ ಎಂಬುವವರಾಗಿದ್ದು, ಚಿಂತಾಮಣಿ ಟೊಮೇಟೊ ಮಾರುಕಟ್ಟೆ ಗೆ ಟೊಮೇಟೊ ಲೋಡ್ ಹಾಕಿಕೊಂಡು ಬರುವ ವೇಳೆ ದುರಂತ‌ ನಡೆದಿದೆ.

 

ಇನ್ನು ಚೇಳೂರು ಚಿಂತಾಮಣಿ ಮಾರ್ಗದ ರಸ್ತೆಯಲ್ಲಿ ಟೊಮೇಟೊ ಸಾಗಿಸುವ ವಾಹನಗಳು ಅತಿ ವೇಗವಾಗಿ ಸಂಚರಿಸುತ್ತಿದ್ದು ಈಹಿಂದೆ ಹಲವು ಅಪಘಾತಗಳು ಸಹ ನಡೆದಿದೆ‌ ಆದರೆ‌ ಈ ರಸ್ತೆಯಲ್ಲಿ ವಾಹನಗಳ ವೇಗ ಮೀತಿಗೆ ಮಾತ್ರ ಯಾವುದೆ ರೀತಿಯ ಕಡಿವಾಣ ಹಾಕದಿರುವುದು ಆರ್ ಟಿ ಒ ಮತ್ತು‌ ಪೊಲೀಸ ಇಲಾಖೆಯ‌ ನಿರ್ಲಕ್ಷ್ಯವೆ ಕಾರಣವೆಂದು ಸಾರ್ವಜನಿಕರು ದೂರಿದ್ದಾರೆ.

 

ಇನ್ನು‌ಡಿಕ್ಕಿಯಾದ‌ರಭಸಕ್ಕೆ‌ಬುಲೋರೋ ವಾಹನ ಬಸ್ ಒಳಗೆ‌ನುಗ್ಗಿದರಿಂದ‌ ಜೆಸಿಬಿ‌,ಕ್ರೇನ್‌ ಮೂಲಕ‌ ವಾಹನಗಳನ್ನು ಹೊರತೆಗೆಯಲಾಯಿತು.

 

ವಿಷಯ ತಿಳಿದ‌ ಕೂಡಲೆ ಸ್ಥಳಕ್ಕೆ‌ ಕೆಂಚಾರ್ಲಹಳ್ಳಿ ಪೊಲೀಸರು ಬೇಟಿ ನೀಡಿ ಪರಿಶೀಲನೆ‌ ಮಾಡಿ‌ ಮುಂದಿನ ಕ್ರಮ ಕೈಗೊಂಡಿದ್ದಾರೆ

 

ವರದಿ : ಸುನಿಲ್ ಎಂ ಚಿಂತಾಮಣಿ