ಹೆಬ್ಬಾಳ ದಲ್ಲಿ ಪೋಷಣ ಮಾಸಾಚರಣೆ ಕಾರ್ಯಕ್ರಮ

ಹೆಬ್ಬಾಳ್ ಗ್ರಾಮದ ಬಸವ ಭವನದಲ್ಲಿ ಪೋಷಣ ಮಾಸಾಚರಣೆಯನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ಶ್ರೀ ಯೋಗಿನಾಥ್ ಸ್ವಾಮೀಜಿ ,ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀ ಹೊಳಪ್ಪ. ಎಚ್ ಮಾತನಾಡಿ ಪೌಷ್ಟಿಕ ಮತ್ತು ಸಮತೋಲನ ಆಹಾರ ಸೇವನೆಯಿಂದ ಅಪೌಷ್ಟಿಕತೆ ಹಾಗೂ ಮಹಿಳೆಯರ ಮತ್ತು ಮಕ್ಕಳಲ್ಲಿನ ರಕ್ತ ಹೀನತೆಯನ್ನು ಹೋಗಲಾಡಿಸಬಹುದು ನೈಸರ್ಗಿಕವಾಗಿ ಬೆಳೆದ ಆಹಾರ ಸೇವನೆ ಉತ್ತಮ ಮಕ್ಕಳ ಬೆಳವಣಿಗೆಯ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು. ಗ್ರಾ. ಪಂ. ಅಧ್ಯಕ್ಷರಾದ ಶ್ರೀಮತಿ ಬೀರವ್ವ ಜಂಗನವರ್ ಮತ್ತು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಬಸವರಾಜ್ ಬಾಯನ್ನವರ್ ಮತ್ತು ಕಿರಿಯ ಆರೋಗ್ಯ ಸಹಾಯಕಿಯರು ಶ್ರೀಮತಿ ರೂಪ ಮುಚ್ಚಂಡಿಯವರು ಉಚಿತವಾಗಿ ಬಿಪಿ ಶುಗರ ತಪಾಸಣೆ ಮಾಡಿದರುಮತ್ತು ಹೆಬ್ಬಾಳ ವಲಯದ ಮೇಲ್ವಿಚಾಕಿ ರೆಣುಕಾ ರಡ್ಡೆರ ವಲಯದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರು ಊರಿನ ತಾಯಂದಿರು ಸಂಘದ ಸದಸ್ಯರು ಸೇರಿ ಸೀಮಂತ ಕಾರ್ಯ, ಅನ್ನಪ್ರಶಾನ್ನ್, ಮಕ್ಕಳ ಹುಟ್ಟು ಹಬ್ಬ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸವಿತಾ ನಿರೂಪಿಸಿ ಸುಧಾ ವಂದಿಸಿ ಎಲ್ಲರೂ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

ವರದಿ/ ‍‍ಸದಾನಂದ ಎಂ ಎಚ್