ಗೌರಿಬಿದನೂರು ಬಾಗೇಪಲ್ಲಿ ಪಟ್ಟಣಗಳು ಸೇರಿದಂತೆ ಈ ತಾಲೂಕು ಎಲ್ಲಾ ಗ್ರಾಮಗಳಿಗೆ ವಿದ್ಯುತ್‌ ವ್ಯತ್ಯಯದ ಪ್ರಕಟಣೆ

ದಿನಾಂಕ 25.08.2024 ರಂದು ಗೌರಿಬಿದನೂರು ಮತ್ತು ಮಿಟ್ಟೆಮರಿ 220/66/11 ಕೆವಿ ಕೇಂದ್ರಗಳಲ್ಲಿ ಕವಿಪ್ರನಿನಿ ವತಿಯಿಂದ ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಈ ವಿದ್ಯುತ್ ಸ್ವೀಕರಣಾ ಕೇಂದ್ರಗಳಿಂದ ವಿದ್ಯುತ್ ಸರಬರಾಜಾಗುವ ಗೌರಿಬಿದನೂರು, ಅಲ್ಲೀಪುರ, ರಮಾಪುರ, ಕುಡುಮಲಕುಂಟೆ, ತೊಂಡೇಬಾವಿ, ಎ.ಸಿ.ಸಿ. ಇ.ಹೆಚ್.ಟಿ, ಮಂಚೇನಹಳ್ಳಿ, ವಿಧುರಾಶ್ವಥ, ಪೆರೇಸಂದ್ರ, ಮಂಡಿಕಲ್ಲು, ಗುಡಿಬಂಡೆ, ಡಿ.ಪಾಳ್ಯ, ವಾಟದಹೊಸಹಳ್ಳಿ, ಜಿ.ಕೊತ್ತೂರು, ಸೋಮೇನಹಳ್ಳಿ, ಬಾಗೇಪಲ್ಲಿ, ಸಾದಲಿ ಮಿಟ್ಟೇಮರಿ, ತಿಮ್ಮಂನಲ್ಲಿ, ಸೋಮನಾಥಪುರ, ಚೇಳೂರು, ಪಾತಪಾಳ್ಯ, ಚಾಕವೇಲು, ಗೂಳೂರು, ಜೂಲಪಾಳ್ಯ 66/11 ಕೆ.ವಿ ಉಪ ವಿದ್ಯುತ್ ಕೇಂದ್ರಗಳಿಗೆ ಇದೆ ಆಗಸ್ಟ್ 25ರಂದು ಬೆಳಿಗ್ಗೆ 10:00am ರಿಂದ ಸಂಜೆ 05:00pm ಗಂಟೆಯ ವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದ್ದು,

ಈ ವಿದ್ಯುತ್ ಉಪಕೇಂದ್ರ ಗಳಿಂದ ವಿದ್ಯುತ್ ಸರಬರಾಜಾಗುವ ಗೌರಿಬಿದನೂರು, ಗುಡಿಬಂಡೆ, ಬಾಗೇಪಲ್ಲಿ ಪಟ್ಟಣಗಳು ಸೇರಿದಂತೆ ಈ ತಾಲ್ಲೂಕುಗಳ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ, ಮಂಡಿಕಲ್ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ದಿನಾಂಕ 25.08.2024 ರಂದು ಬೆಳಿಗ್ಗೆ 10:00 ರಿಂದ ಸಂಜೆ 05:00 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಕೋರಲಾಗಿದೆ.