ಹುಕ್ಕೇರಿಗೆ ನೂತನ ಆರ್‌ಎಫ್‌ಒ ನೇಮಕ, ಅಧಿಕಾರ ಸ್ವೀಕಾರ

ಹುಕ್ಕೇರಿ :  ತಾಲೂಕಿನ ಪ್ರಾದೇಶಿಕ ಮತ್ತು ಸಾಮಾಜಿಕ ವಲಯ ಅರಣ್ಯ ಇಲಾಖೆಗಳಿಗೆ ನೂತನವಾಗಿ ಆರ್‌ಎಫ್‌ಒ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿಯಾಗಿ ಬಿ.ಎಲ್.ಸನದಿ, ಸಾಮಾಜಿಕ ವಲಯ ಅರಣ್ಯ ಅಧಿಕಾರಿಯಾಗಿ ಭಾರತಿ ನಂದಿಹಳ್ಳಿ ಅವರು ನೇಮಕಗೊಂಡಿದ್ದಾರೆ. ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದ ಬಿ.ಎಲ್.ಸನದಿ,

ಭಾರತಿ ನಂದಿಹಳ್ಳಿ ಮಾತನಾಡಿ, ಅಧಿಕಾರವಧಿಯಲ್ಲಿ ಅರಣ್ಯ ಸಂಪತ್ತು ಬೆಳೆಸಲು ದಕ್ಷ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಲಾಗುವುದು. ಜನಪ್ರತಿನಿಧಿಗಳು,

ಸಾರ್ವಜನಿಕರು ಮತ್ತು ವಿವಿಧ ಇಲಾಖೆಗಳ ಮಾರ್ಗದರ್ಶನ, ಸಲಹೆಯೊಂದಿಗೆ ಹುಕ್ಕೇರಿ ತಾಲೂಕಿನ ಹಸೀರಿಕರಣಕ್ಕೆ ಆದ್ಯತೆ ನೀಡಲಾ ಗುವುದು ಎಂದರು. ಉಪ ವಲಯ ಅರಣ್ಯಾ ಧಿಕಾರಿ ವಿಷ್ಣುಕುಮಾರ ನಾಯಿಕ, ರಾಕೇಶ ಮುರಾರಿ, ಪ್ರಭುಲಿಂಗ ತಂಗಡಿ, ಸದಾಶಿವ ಮಾದರ, ಅಶ್ವಫ್‌ಅಲಿ ನದಾಫ, ಆನಂದ ಮದನೆ, ರಾಕೇಶ ಸೊಲ್ಲಾಪುರೆ, ಗಜಾನನ ಪಾಟೀಲ, ಎಸ್.ಎಸ್.ಕೋರಿ, ಶಿವುಕುಮಾರ ನಾಯಿಕ ಮತ್ತಿತರರು ಉಪಸ್ಥಿತರಿದ್ದರು

 

ವರದಿ / ಸದಾನಂದ ಎಚ್