ಬಿ ಯು ಬೈರಕದಾರ ಅವರಿಗೆ ರಾಜ್ಯಮಟ್ಟದ ಬೇಂದ್ರೆ ಕಾವ್ಯ ಪುರಸ್ಕಾರ ಹಾಗೂ ಸನ್ಮಾನ

ಧಾರವಾಡ -ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು ಜಿಲ್ಲಾ ಘಟಕ ಧಾರವಾಡ ನಗರ ಘಟಕ ಧಾರವಾಡ ರಾಜ್ಯಮಟ್ಟದ ಬೇಂದ್ರೆ ಕಾವ್ಯ ಪುರಸ್ಕಾರ 2024 ಸಮಾರಂಭದಲ್ಲಿ *ಶ್ರೀ ಬಿ ಯು ಬೈರಕದಾರ* ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಯನ್ನು ಪರಿಗಣಿಸಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.), ಬೆಂಗಳೂರು, ಜಿಲ್ಲಾ ಘಟಕ ಧಾರವಾಡ ವತಿಯಿಂದ ಧಾರವಾಡ ನಗರದ ರಂಗಾಯಣ ಸಭಾಭವನದಲ್ಲಿ 2024 ಆಗಸ್ಟ್ 24, ಶನಿವಾರ ಹಮ್ಮಿಕೊಂಡ ಧಾರವಾಡ ತಾಲ್ಲೂಕು ಘಟಕ ಉದ್ಘಾಟನೆ ಹಾಗೂ ಸಾಹಿತಿ ಎ.ಎ. ದರ್ಗಾರವರ “ಬೆಂದ ಬೆಳಸಿ” ಷಟ್ಟದಿ ಕಾವ್ಯ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ, ಜಿಲ್ಲಾ ಮಟ್ಟದ ಕವಿಗೋಷ್ಠಿ. ಹಾಗೂ ವಿಚಾರಗೋಷ್ಠಿ ವೇದಿಕೆಯಲ್ಲಿ “ರಾಜ್ಯ ಮಟ್ಟದ ಬೇಂದ್ರೆ ಕಾವ್ಯ ಪುರಸ್ಕಾರ 2024” ನೀಡಿ ಗೌರವಿಸಿದೆ.

ತಮ್ಮ ಭವಿತವ್ಯ ಉಜ್ವಲಿಸಲಿ, ಪ್ರಜ್ವಲಿಸಲಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಜರಾಮರವಾಗಲಿ, ತಮ್ಮ ಸಾಹಿತ್ಯಕ ಸೇವೆ ನೂರ್ಮಡಿಗೊಂಡು ಚಿರಾಯುವಾಗಲಿ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸನ್ಮಾನಿಸಿ ಗೌರವಿಸಲಾಯಿತು.