ದಲಿತ ಸೇನೆ ರಾಜ್ಯ ಸಂ.ಕಾ.ಜಾವಿದಖಾನ್ ನೇಮಕ

ಮಾನ್ವಿ: ದಲಿತ ಸೇನೆಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸೂರ್ಯಮಣಿ ಬೀವ ಗಡೆ ನಾಗಪುರು ಸೂಚನೆ ಮೇರೆಗೆ ದಲಿತ ಸೇನೆ  ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ಜಾವಿದಖಾನ್ ಮಾನ್ವಿ ಇವರನ್ನು ನೇಮಕ ಮಾಡಲಾಗಿದೆ ಎಂದು ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ ಜೀ. ಯಳಸಂಗಿ ನ್ಯಾಯವಾದಿಗಳು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.                                             ದಲಿತ ಸೇನೆಯ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಜಾವಿದಖಾನ್ ಇವರು ರಾಮ್‌ ವಿಲಾಸ್ ಪಾಸ್ವಾನ್ ಜೀ ರವರು ಸ್ಥಾಪಿಸಿದ ದಲಿತ ಸೇನೆಯು ಭಾರತ ದೇಶದ ಶೋಷಿತ ಸಮುದಾಯದ ಗಟ್ಟಿ ಧ್ವನಿಯಾಗಿದ್ದು ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಬಲಿಷ್ಠ ಸಂಘಟನೆಯ ಹಿರಿಮೆ ಗರಿಮೆಯನ್ನು ಹೊಂದಿದೆ ಜೊತೆಗೆ
ಬೋಧಿಸತ್ವ ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮಾ ಜ್ಯೋತಿರಾವ್ ಫುಲೆ, ಛತ್ರಪತಿ ಸಾಹುಜಿ ಮಹಾರಾಜರ ವಿಚಾರಧಾರೆಯಲ್ಲಿ ಚಳುವಳಿ ನಡೆಸಿರುವ ರಾಜ್ಯದ ದಲಿತ ಸೇನೆಯಲ್ಲಿ ಅನೇಕ ಜನ ಚಿಂತಕರು ಸಂಘಟಕರು ಹೋರಾಟಗಾರರ ಕೂಟ ಇದ್ದು ಇಂತಹ ಹೆಮ್ಮೆಯ ದಲಿತ ಸೇನೆಯ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕವಾಗಿರುವ ಜಾವಿದಖಾನ್ ಇವರು ಬಹುಜನ ಚಳುವಳಿಯನ್ನು ರಾಜ್ಯಾದ್ಯಂತ ಮುನ್ನಡೆಸಿಕೊಂಡು ಹೋಗುವಂತೆ ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ ಜೀ. ಯಳಸಂಗಿ ನ್ಯಾಯವಾದಿಗಳು ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!