ರಾಮಲಿಂಗಯ್ಯ ಶ್ರೀಗಳಿಗೆ “ನೋಬೆಲ್ ಕನ್ನಡಿಗ” ಪ್ರಶಸ್ತಿ ಪ್ರಧಾನ

ತಾಳಿಕೋಟೆ: ತಾಲೂಕಿನ ಚಬನೂರ ಗ್ರಾಮ ಹಿರೇಮಠದ ಪೀಠಾಧಿಪತಿ,ರಾಷ್ಟ್ರೀಯ ಬೇಡ ಜಂಗಮ ಸಮಾಜದ ಗೌರವ ಅಧ್ಯಕ್ಷರಾದ ಜ್ಯೋತಿಷ್ಯ ರತ್ನ ಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳಿಗೆ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಬೆಂಗಳೂರು ಇವರು ಕೊಡ ಮಾಡುವ 2025 ನೇ ಸಾಲಿನ “ನೊಬೆಲ್ ಕನ್ನಡಿಗ” ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಧಾನ ಮಾಡಿ ಗೌರವಿಸಲಾಗಿದೆ. ಬೆಂಗಳೂರಿನ ನಯನ ಸಭಾಂಗಣ ಕನ್ನಡ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಜೂನ್ 7ರಂದು ಹಮ್ಮಿಕೊಂಡ “ಬುದ್ಧ ಬಸವ ಮತ್ತು ಅಂಬೇಡ್ಕರ್ ಜಯಂತಿ ಹಾಗೂ ಸಮಾಜದ ಕುರಿತು ವಿಚಾರ ಸಂಕೀರಣ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರಧಾನ” ಸಮಾರಂಭದಲ್ಲಿ ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗಡೆ ಅವರು ರಾಜ್ಯದ ಗೌರವಾನ್ವಿತ ಸ್ವಾಮೀಜಿಗಳು ಹಾಗೂ ಸಾಹಿತಿಗಳ ಸಮ್ಮುಖದಲ್ಲಿ ಪೂಜ್ಯ ರಾಮಲಿಂಗಯ್ಯ ಶ್ರೀಗಳಿಗೆ “ನೊಬೆಲ್ ಕನ್ನಡಿಗ” ಅಂತರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಮಲಿಂಗಯ್ಯ ಶ್ರೀಗಳು ಯಾರು ಸಮಾಜಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೋ ಅಂಥವರು ಸಮಾಜದಲ್ಲಿ ಗುರುತಿಸಲ್ಪಡುತ್ತಾರೆ. ನಮ್ಮ ಬದುಕು ಸದಾ ನಿಸ್ವಾರ್ಥದ ಬದುಕಾಗಿರಬೇಕು, ನಮಗಾಗಿ ಬದುಕುವುದು ಮುಖ್ಯವಲ್ಲ ಸಮಾಜದ ಹಿತಕ್ಕಾಗಿ ಬದುಕುವಂಥವರಾಗಬೇಕು. ಈ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಗುಣವಂತ ಮಂಜು ಅವರ ಸಮಾಜಮುಖಿ ಕಾಳಜಿ ನಿಜಕ್ಕೂ ಮೆಚ್ಚುವಂತದ್ದು ಅವರಿಗೆ ನಾವೆಲ್ಲರೂ ಸಹಕರಿಸಿ ಪ್ರೋತ್ಸಾಹಿಸುವ ಅಗತ್ಯ ಇದೆ ಎಂದರು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗೋವಿಂದರಾಜ ನಗರ ಶಾಸಕ ಪ್ರಿಯಾಕೃಷ್ಣ, ಬಿಜೆಪಿ ಮುಖಂಡ ಅಂಬರೀಶಗೌಡ, ರಾಮಲಿಂಗಯ್ಯ ಶ್ರೀಗಳಿಗೆ “ನೋಬೆಲ್ ಕನ್ನಡಿಗ” ಪ್ರಶಸ್ತಿ ಪ್ರಧಾನ
ತಾಳಿಕೋಟೆ: ತಾಲೂಕಿನ ಚಬನೂರ ಗ್ರಾಮ ಹಿರೇಮಠದ ಪೀಠಾಧಿಪತಿ,ರಾಷ್ಟ್ರೀಯ ಬೇಡ ಜಂಗಮ ಸಮಾಜದ ಗೌರವ ಅಧ್ಯಕ್ಷರಾದ ಜ್ಯೋತಿಷ್ಯ ರತ್ನ ಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳಿಗೆ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಬೆಂಗಳೂರು ಇವರು ಕೊಡ ಮಾಡುವ 2025 ನೇ ಸಾಲಿನ “ನೊಬೆಲ್ ಕನ್ನಡಿಗ” ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಧಾನ ಮಾಡಿ ಗೌರವಿಸಲಾಗಿದೆ. ಬೆಂಗಳೂರಿನ ನಯನ ಸಭಾಂಗಣ ಕನ್ನಡ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಜೂನ್ 7ರಂದು ಹಮ್ಮಿಕೊಂಡ “ಬುದ್ಧ ಬಸವ ಮತ್ತು ಅಂಬೇಡ್ಕರ್ ಜಯಂತಿ ಹಾಗೂ ಸಮಾಜದ ಕುರಿತು ವಿಚಾರ ಸಂಕೀರಣ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರಧಾನ” ಸಮಾರಂಭದಲ್ಲಿ ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗಡೆ ಅವರು ರಾಜ್ಯದ ಗೌರವಾನ್ವಿತ ಸ್ವಾಮೀಜಿಗಳು ಹಾಗೂ ಸಾಹಿತಿಗಳ ಸಮ್ಮುಖದಲ್ಲಿ ಪೂಜ್ಯ ರಾಮಲಿಂಗಯ್ಯ ಶ್ರೀಗಳಿಗೆ “ನೊಬೆಲ್ ಕನ್ನಡಿಗ” ಅಂತರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಮಲಿಂಗಯ್ಯ ಶ್ರೀಗಳು ಯಾರು ಸಮಾಜಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೋ ಅಂಥವರು ಸಮಾಜದಲ್ಲಿ ಗುರುತಿಸಲ್ಪಡುತ್ತಾರೆ. ನಮ್ಮ ಬದುಕು ಸದಾ ನಿಸ್ವಾರ್ಥದ ಬದುಕಾಗಿರಬೇಕು, ನಮಗಾಗಿ ಬದುಕುವುದು ಮುಖ್ಯವಲ್ಲ ಸಮಾಜದ ಹಿತಕ್ಕಾಗಿ ಬದುಕುವಂಥವರಾಗಬೇಕು. ಈ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಗುಣವಂತ ಮಂಜು ಅವರ ಸಮಾಜಮುಖಿ ಕಾಳಜಿ ನಿಜಕ್ಕೂ ಮೆಚ್ಚುವಂತದ್ದು ಅವರಿಗೆ ನಾವೆಲ್ಲರೂ ಸಹಕರಿಸಿ ಪ್ರೋತ್ಸಾಹಿಸುವ ಅಗತ್ಯ ಇದೆ ಎಂದರು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗೋವಿಂದರಾಜ ನಗರ ಶಾಸಕ ಪ್ರಿಯಾಕೃಷ್ಣ, ಬಿಜೆಪಿ ಮುಖಂಡ ಅಂಬರೀಶಗೌಡ, ಕಿರು ತೆರೆ ನಟಿ ದೀಪಿಕಾದಾಸ್,ಖ್ಯಾತ ಮನೋವೈದ್ಯ ಡಾ.ಸಂತೋಷ್ ಕುಮಾರ ಎಂ. ಸಹಕಾರಿ ದುರೀಣ ಡಾ.ಬಿ.ಡಿ.ಭೂಕಾಂತ,ಡಾ.ಸಂಕಲ್ಪ ನರಸಿಂಹಮೂರ್ತಿ,ಡಾ.ಭ್ರಮರ ಶಿವಶಂಕರ, ಸಮಾಜಸೇವಕಿ ಡಾ.ಗಾಯತ್ರಿ ರುದ್ರೇಶ, ಪ್ರಗತಿಪರ ರೈತ ಡಾ.ದಯಾನಂದ ಮೂರ್ತಿ, ಜಲ ದಾಸೋಹಿ ಡಾ.ಜಯರಾಮ್, ಪ್ರತಿಷ್ಠಾನದ ಅಧ್ಯಕ್ಷ ಡಾ.ಗುಣವಂತ ಮಂಜು, ಪದಾಧಿಕಾರಿಗಳು ಹಾಗೂ ಗಣ್ಯರು ಇದ್ದರು.

ವರದಿ ದೇವು ಕೋಚಬಾಳ ತಾಳಿಕೋಟಿ .

error: Content is protected !!