ಹುಕ್ಕೇರಿ: ಶ್ರೀ ಮಹಾಲಕ್ಷ್ಮಿ ದ್ಯಾಮವ್ವ ದೇವಿ ಗುಡಿ ಹತ್ತಿರ ವಟ ಸಾವಿತ್ರಿ ಪೂಜೆ ನೆರವೇರಿಸಿ ಸುಮಂಗಲರಿಗೆ ಉಡಿ ತುಂಬಾ ಕಾರ್ಯಕ್ರಮ ಜರುಗಿತು ಹಿಂದೂ ಕ್ಯಾಲೆಂಡರ್ ಪ್ರಕಾರ ವಟ ಸಾವಿತ್ರಿ ವ್ರತವನ್ನು ಜ್ಯೇಷ್ಠ ತಿಂಗಳ ಅಮಾವಾಸ್ಯೆಯ ದಿನದಂದು ಆಚರಿಸಲಾಗುತ್ತದೆ. ಈ ದಿನ ವಿವಾಹಿತ ಮಹಿಳೆಯರು ಆಲದ ಮರವನ್ನು ಪೂಜಿಸುತ್ತಾರೆ. ವಟ ಸಾವಿತ್ರಿ ಉಪವಾಸವನ್ನು ಆಚರಿಸುವ ಮೂಲಕ, ಪತಿಯ ಜೀವನವು ದೀರ್ಘವಾಗಿರಲೆಂದು ಪ್ರಾರ್ಥಿಸುತ್ತಾರೆ. ಮತ್ತು ವ್ರತವನ್ನು ಆಚರಿಸುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ ಬರುತ್ತದೆ ಎಂದು ನಂಬಲಾಗಿದೆ. ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ವಿಷ್ಣು, ಬ್ರಹ್ಮ ಮತ್ತು ಶಿವ ಆಲದ ಮರದಲ್ಲಿ ವಾಸಿಸುತ್ತಾರೆ. ವಟ ಸಾವಿತ್ರಿ ಉಪವಾಸದ ದಿನದಂದು, ವಿವಾಹಿತ ಮಹಿಳೆಯರು ಆಲದ ಮರವನ್ನು ಪ್ರದಕ್ಷಿಣೆ ಹಾಕಿ ಅದರ ಸುತ್ತಲೂ ಕಲ್ವಾ ಕಟ್ಟುತ್ತಾರೆ. ಇದನ್ನು ಮಾಡುವುದರಿಂದ, ಪತಿಗೆ ಅದೃಷ್ಟ ಸಿಗುತ್ತದೆ ಮತ್ತು ಆತನು ಆಸೆಗಳನ್ನು ಪೂರೈಸುತ್ತಾನೆ ಎಂದು ನಂಬಲಾಗಿದೆ. ಉತ್ತರ ಭಾರತದಲ್ಲಿ ವಟ ಸಾವಿತ್ರ ವ್ರತವನ್ನು ವಟ್ ಸಾವಿತ್ರಿ ವ್ರತ್ ಅಂತ ಕರೆಯಲಾಗುತ್ತದೆ.
ವಟ ಸಾವಿತ್ರಿ ವ್ರತದ ಮಹತ್ವ: ಹಿಂದೂ ಧರ್ಮದ ಪುರಾಣಗಳ ಪ್ರಕಾರ, ಸಾವಿತ್ರಿ ಸಾವಿನ ದೇವರಾದ ಯಮನನ್ನು ಗೊಂದಲಕ್ಕೀಡು ಮಾಡಿ, ತನ್ನ ಪತಿ ಸತ್ಯವಾನ್ ಪ್ರಾಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿದಳು. ಪತಿ ಸತ್ಯವಾನ್ ಸಾವನ್ನಪ್ಪಿದ್ದಾಗ ಸಾವಿತ್ರಿ ಯಮನೊಡನೆ ಮಾತಿನಲ್ಲೇ ಹೋರಾಡಿ, ಪತಿಯ ಪ್ರಾಣವನ್ನು ವಾಪಸ್ ಪಡೆಯುತ್ತಾಳೆ. ಅಂದಿನಿಂದ ಸಾವಿತ್ರಿ ಅತಿ ಶ್ರೇಷ್ಠರಲ್ಲಿ ಒಬ್ಬರಾದರು. ಆದ್ದರಿಂದ, ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯ ಮತ್ತು ಯೋಗಕ್ಷೇಮಕ್ಕಾಗಿ ವಟ ಸಾವಿತ್ರಿ ಉಪವಾಸವನ್ನು ಆಚರಿಸುತ್ತಾರೆ. ಹುಕ್ಕೇರಿ ನಗರದ ವಿವಿಧಡೆ ಸುಮಂಗಲೆ ವಟಸಾವಿತ್ರಿ ಪೂಜೆ ನೆರವೇರಿಸಿದರು.