ರಾಯಚೂರು: ನಗರದ ಹೊರವಲಯದ ಬೈಪಾಸ್ ರಸ್ತೆಯ ಮನ್ಸಲಾಪುರು ಕೆರೆಯ ಬಳಿಯಲ್ಲಿ ಶನಿವಾರ ಬೆಳಗಿನ ಜಾವ 5ಗಂಟೆಗೆ ಹೊಂಡೈ ವೆನ್ಯೂ ಕಾರ್ ರಸ್ತೆ ಮಧ್ಯೆಯ ಬಾಂಡ್ ಕಲ್ಲಿಗೆ ಕಾರು ಡಿಕ್ಕಿಯಾಗಿ ಉಡುಪಿಯ ಕುಂದಾಪೂರ ಮೂಲದ ಓರ್ವ ಮಹಿಳೆ ಸಾವನ್ನಪ್ಪಿದ್ದು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಟ್ರೇಶ್ವರ ಗ್ರಾಮದ ಹಾಜೀರಾ (65)ಎಂಬ ಮಹಿಳೆ ಮೃತಪಟ್ಟಿದ್ದಾಳೆ. ಇಶಾನ್ ಅಬ್ದುಲ್, ಇಲಾನ್ ಇಸ್ಮಾಯಿಲ್, ಮಹಮದ್ ಇಜಾನ್, ಮಹಮದ್ ಇಮ್ರಾನ್, ಕಾರ್ ಡ್ರೈವ್ ಮಾಡಿತ್ತ ಫರಾನಾ ಎಂಬುವವರು ಗಾಯಗೊಂಡು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಡುಪಿಯ ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದಿಂದ ಹೈದ್ರಾಬಾದ್ ಗೆಪ್ರವಾಸಕ್ಕೆಂದು ಕುಟುಂಬ ಸದಸ್ಯರು ಹೋಗುತ್ತಿದ್ದು ಕುಂದಾಪುರ, ಹುಬ್ಬಳ್ಳಿ, ಸಿಂಧನೂರು, ರಾಯಚೂರು ಮಾರ್ಗವಾಗಿ ಹೋಗುವಾಗ ವೇಗವಾಗಿ ಚಾಲನೆ ಮಾಡುತ್ತಿದ್ದ ಕಾರು ಇಂದು ಬೆಳಗಿನ ಜಾವ 5ಗಂಟೆಗೆ ಮನ್ಸಲಾಪುರ ಕ್ರಾಸ್ ಬಳಿಯಲ್ಲಿ ರಸ್ತೆ ಮಧ್ಯೆಯ ಬಾಂಡ್ ಕಲ್ಲಿಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಪಕ್ಕದಲ್ಲಿ ಹೊಲಕ್ಕೆ ಬಿದ್ದಿದೆ ಇದರ ಪರಿಣಾಮ ಹಿಂಬದಿ ಕುಳಿತಿದ್ದ ಹಾಜೆರಾಳ ತಲೆಗೆ, ಕೈಕಾಲುಗಳಿಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು, ಗಾಯಾಳುಗಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಗಾರಲ ದಿನ್ನಿ ವೀರನ ಗೌಡ