ರೈತರು ಕಡ್ಡಾಯವಾಗಿ ಎಫ್‌ಐಡಿ ಮಾಡಿಸಿ

ಚಿತ್ತಾಪುರ; ತಾಲೂಕಿನ ಎಲ್ಲ ರೈತರು ತಮ್ಮ ಜಮೀನಿನ ಸರ್ವೆ ನಂಬರ್‌ಗಳು ಎಫ್‌ಐಡಿಗೆ ಜೋಡಣೆ ಆಗಿರುವ ಕುರಿತು ಖಚಿತಪಡಿಸಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕ‌ರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿದ ಅವರು, ಯಾವ ರೈತರು ಇಲ್ಲಿವರೆಗೆ ಎಫ್‌ಐಡಿ ಮಾಡಿಕೊಂಡಿರುವುವದಿಲ್ಲವೋ ಅಂತಹ ರೈತರು ಕೂಡಲೇ ತಮ್ಮ ಆಧಾರ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್ ಪ್ರತಿಗಳನ್ನು ತೆಗೆದುಕೊಂಡು ಹತ್ತಿರದ ರೈತ ಸಂಪರ್ಕ, ಗ್ರಾಮ ಒನ್, ಸಿಎಸ್ ಸಿ ಕೇಂದ್ರಗಳಿಗೆ ಭೇಟಿ ನೀಡಿ ರೈತರು ಕೂಡಲೇ ಎಫ್‌ಐಡಿ ಮಾಡಿಸಿಕೊಳ್ಳಬೇಕು. ಒಂದು ವೇಳೆ ರೈತರು ಎಫ್ ಐಡಿ ಮಾಡಿಕೊಳ್ಳದೆ ಇದ್ದಲ್ಲಿ ಹಾಗೂ ತಮ್ಮ ಜಮೀನಿನ ಸರ್ವೆ ನಂಬರಗಳು ಎಫ್‌ಐಡಿ(ಫ್ರೊಟ್ಸ್ ಐಡಿ)ಗೆ ಜೋಡಣೆ ಆಗದಿದ್ದಲ್ಲಿ ಅಂತಹ ರೈತರಿಗೆ ಬೆಳೆ ಹಾನಿ ಪರಿಹಾರ, ಬೆಳೆ ವಿಮೆ ಪರಿಹಾರ ಹಾಗೂ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ತಾವು ಬೆಳೆದ ಬೆಳೆಗಳನ್ನು ಖರೀದಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

error: Content is protected !!