ಹಿಂಡಲಗಾ ಕಾರಾಗೃಹದಲ್ಲಿ ಕೈದಿಗಳ ಪ್ರತಿಭಟನೆ

 

ಬೆಳಗಾವಿ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಸಿಗರೇಟ್ ಸೇದಿದ ಪರಿಣಾಮ ಹಿಂಡಲಗಾ ಕಾರಾಗೃಹದ ಖೈದಿಗಳಿಂದಲೂ ಸಿಗರೇಟ್ ನೀಡುವಂತೆ ಒತ್ತಾಯಿಸಿ ಭಾನುವಾರ ಕಾರಾಗೃಹದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಟ ದರ್ಶನಗೆ ಜೈಲಿನಲ್ಲಿ ರಾಜಾತಿಥ್ಯ ಕೊಡುತ್ತಿದ್ದ ಫೋಟೋಗಳು ವೈರಲ್ ಆದಂತೆ ರಾಜ್ಯದ ಎಲ್ಲಾ ಜೈಲುಗಳಲ್ಲಿ ಟ್ರಿಕ್ ರೂಲ್ಸ್ ಜಾರಿಯಾಗಿದೆ ಬಿಡಿ ಸಿಗರೇಟ್ ಈ ತರ ವಿಷಯಗಳಿಗೆ ಬ್ರೇಕ್ ಬಿದ್ದಿದ್ದು ಕೈದಿಗಳು ರೊಚ್ಚಿಗೆದ್ದು ಹಿಂಡಲ್ಗಾ ಜೈಲಿನಲ್ಲಿ ಬಿಡಿ ಸಿಗರೇಟ್ ತಂಬಾಕು ನೀಡುವಂತೆ ಕೈದಿಗಳು ಬೆಳಗಿನ ಉಪಹಾರ ತಿರಸ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ ಬಿ ಡಿ ಸಿಗರೇಟ್ ತಂಬಾಕು ಕೊಡುವವರಗೆ ನಾವು ತಿಂಡಿ ಊಟ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಎನ್ನಲಾಗಿದೆ ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿ ನಟ ದರ್ಶನ್ ಗೆ ರಾಜಾತಿಥ್ಯ ದೊರೆಯುತ್ತಿರುವ ಫೋಟೋ ಹೊರ ಬರುತ್ತಿದ್ದಂತೆ ರಾಜ್ಯ ಸರ್ಕಾರ ಎಚ್ಚೆತ್ತಿದ್ದು ಕೂಡಲಿ ಒಂಬತ್ತು ಅಧಿಕಾರಿಗಳನ್ನು ಅಮಾನತ್ತು ಮಾಡಿದೆ ಅಲ್ಲದೆ ದರ್ಶನ್ನರನ್ನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ ಮತ್ತು ದರ್ಶನ್ ಸಹಚರರನ್ನು ರಾಜ್ಯ ವಿವಿಧ ಕೇಂದ್ರ ಕಾರಾಗೃಹಗಳಿಗೆ ಶಿಫ್ಟ್ ಮಾಡಲಾಗಿದೆ

 

ವರದಿ /ಸದಾನಂದ ಹೆಚ್