ಯುವಜನೋತ್ಸವ ಕಾರ್ಯಕ್ರಮದ ಅಂಗವಾಗಿ ಐದು ಕಿಲೋಮೀಟರ್ ಓಟದ ಸ್ಪರ್ಧೆ

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಬೀದರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ್ ಜಿಲ್ಲೆ ಏಡ್ಸ್ ನಿಯಂತ್ರಣ ತಡೆಗಟ್ಟುವ ಘಟಕ ಹಾಗೂ ರೆಡ್ ರಿಬನ್ ಕಾಲೇಜುಗಳು, ಎಲ್ ಬಿ ಎಸ್, ಪ್ರವರ್ದ ,ಎಸ್ ಟಿ ಪಿ, ಸಹಯೋಗದೊಂದಿಗೆ ಇಂದು ಬೀದರ್ ನಲ್ಲಿ ಯುವಜನೋತ್ಸವ ಕಾರ್ಯಕ್ರಮದ ಅಂಗವಾಗಿ ಐದು ಕಿಲೋಮೀಟರ್ ಓಟದ ಸ್ಪರ್ಧೆ ಮೆರಥನ್ ಮಾಡಲಾಯಿತು. ತದನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಎಚ್ಐವಿ ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಮಹೇಶ್ ಬಿರಾದರ್, ಪ್ರಭಾರಿ ಡಿಎಚ್ಒ ಡಾಕ್ಟರ್ ರಾಜಶೇಖರ್ ಪಾಟೀಲ್, ಕಾರ್ಯಕ್ರಮ ಅಧಿಕಾರಿ ಡಾಕ್ಟರ್ ದಿಲೀಪ್ ಡೊಂಗ್ರೆ, ಡಾ ಶಂಕ್ರಪ್ಪ ಬೊಮ್ಮ, ಡಾಕ್ಟರ್ ಶಿವಕುಮಾರ್ ಬಿ, ವೀರಭದ್ರಪ್ಪ ಉಪ್ಪಿನ್, ಸೂರ್ಯಕಾಂತ್ ಸಂಗೋಳ್ಕರ್ ಅರವಿಂದ ಕುಲಕರ್ಣಿ ಐಸಿಟಿಸಿ ಬ್ರೀಮ್ಸ್ ಬೀದರ ಉಪಸ್ಥಿತರಿದ್ದರು.