ಹುಮನಾಬಾದ : ಮಾಜಿ ಸಚಿವ ರಾಜಶೇಖರ ಬಿ.ಪಾಟೀಲ್ ರವರು ಶಾಸಕರಿದ್ದ ಸಮಯದಲ್ಲಿ ಮಾಡಿರುವ ಕಾಮಗಾರಿಗಳು ಇಂದು ಡಾ॥ ಸಿದ್ದು ಪಾಟೀಲ್ ರವರು ಉದ್ಘಾಟನೆ ಮಾಡಿ, ವೇದಿಕೆಯ ಮೇಲೆ ಅಪ್ರಬುದ್ಧರಂತೆ ಮಾತನಾಡುತ್ತಿರುವ ಶಾಸಕರು ನೈತಿಕವಾಗಿ ದಿವಾಳಿಯಾಗಿದ್ದಾರೆ,
ರಾಜಶೇಖರ ಬಿ.ಪಾಟೀಲ್ ರವರು ಅಧಿಕಾರದಲ್ಲಿದ್ದಾಗ ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯ ಮೇಲೆ ಒತ್ತಡ ಹೇರಿ ಹುಮನಾಬಾದ ಮತಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿ ಮಾಡಿದ ಕೀರ್ತಿ ರಾಜಶೇಖರ ಬಿ.ಪಾಟೀಲ್ ರವರಿಗೆ ಸಲ್ಲುತ್ತದೆ ಆದರೇ ಇಗಿನ ಶಾಸಕರಿಗೆ ಅನುಭವ ಇಲ್ಲದ ಕಾರಣ ಶಾಸಕರ ವಿಫಲತೆಯನ್ನು ಮುಚ್ಚಿ ಹಾಕಲು ವಿನಾ ಕಾರಣ ಪುನ: ಪುನ: ನಮ್ಮ ಸರ್ಕಾರದ ಮೇಲೆ ಹಾಗೂ ಮಾಜಿ ಸಚಿವರ ಮೇಲೆ, ವಿಧಾನ ಪರಿಷತ್ ಸದಸ್ಯರ ಮೇಲೆ ಗೂಬೆ ಕೂರಿಸುವ ಕೆಲಸ ಶಾಸಕರು ಮಾಡುತ್ತಿದ್ದಾರೆ.
ಅಧ್ಯಕ್ಷ ಅಧ್ಯಕ್ಷ ಎಂದು ಜಂಬಕೊಚ್ಚಿಕೊಳ್ಳುವ ಶಾಸಕರೆ ಎರಡು ವರ್ಷದ ಅವಧಿಯಲ್ಲಿಯೇ ಉತ್ತರಕುಮಾರನಂತೆ ವರ್ತಿಸುತ್ತಿರುವ ನಿಮಗೆ ಮತಿಬ್ರಮಣೆಯಾಗಿದೆ.
ಶಾಸಕರಾದ ನಿಮಗೇ ಮಾಹಿತಿ ಕೊರತೆ ಇದಹಾಗೆ ಅನಿಸುತ್ತೆ ನಿವು ಕೆಳಮನೆಯ ಶಾಸಕರಾದರೆ ನಮ್ಮ ವಿಧಾನ ಪರಿಷತ್ ಸದಸ್ಯರು ಮೇಲ್ಮನೆಯ ಶಾಸಕರಾಗಿರುತ್ತಾರೆ. ನಿವು ಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಶಾಸಕರು ಆದರೆ ನಮ್ಮ ವಿಧಾನ ಪರಿಷತ್ ಸದಸ್ಯರು ಬೀದರ ಜಿಲ್ಲೆಯಿಂದ ಹರಪನಳ್ಳಿವರೆಗೆ ಜನಪ್ರತಿನಿಧಿಯಾಗಿದ್ದಾರೆ. ನೀವು ಹೇಳುವ ಹಾಗೇ ಹುಮನಾಬಾದನ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಶಿಷ್ಟಚಾರದ ಬಗ್ಗೆ ಕೇಳಬಾರದಾ? ತಾವೇನು ಹುಮನಾಬಾದನಲ್ಲಿ “ಹುಕುಂ ಶಾಹಿ” ಆಡಳಿತ ನಡೆಸಬೇಕೆಂದುಕೊಂಡಿದ್ದಿರಾ?. ನಮ್ಮ ವಿಧಾನ ಪರಿಷತ್ ಸದಸ್ಯರು ಶಿಷ್ಠಾಚಾರದ ಬಗ್ಗೆ ನಿಮಗೇನು ಕೇಳಿಲ್ಲ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕೇಳಿದರೆ ನಿಮಗೇಕೆ ನೋವಾಗುತ್ತಿದೆ.
ಶಾಸಕರೆ ನಮ್ಮ ವಿಧಾನ ಪರಿಷತ್ ಸದಸ್ಯರು ಹುಮನಾಬಾದನಲ್ಲಿ ಜನಿಸಿ ಹುಮನಾಬಾದ ಜನರ ಮೇಲೆ ಅಪಾರ ಪ್ರೀತಿ ನಂಬಿಕೆ ಇದೇ ಅದು ನಿಮ್ಮಗೆ ಸಹಿಸಿಕೊಳ್ಳಲು ಆಗುತ್ತಿಲ್ಲಾ.
ಶಾಸಕರೆ ದಿನಾಂಕ: 16-05-2025ರಂದು ನಡೆದ ಕಾರ್ಯಕ್ರಮ ಸರಕಾರಿ ಕಾರ್ಯಕ್ರಮ ಅಥವಾ ನಿಮ್ಮ ಪಕ್ಷದ ಕಾರ್ಯಕ್ರಮ ಎಂದು ಮೊದಲು ತಿಳಿದುಕೊಳ್ಳಿ, ಸರ್ಕಾರಿ ಕಾರ್ಯಕ್ರಮವನ್ನು ಹೇಗೆ ನಡೆಸಿಕೊಂಡು ಹೋಗಬೇಕು ಎಂದು ಕನಿಷ್ಠ ಪರಿಜ್ಞಾನ ನಿಮಗೆ ಇಲ್ಲವೇ?
ನಮ್ಮ ಸರ್ಕಾರದಿಂದ ಸಾವಿರಾರೂ ಕೋಟಿ ಅನುದಾನ ಬಂದರು ಕೂಡ ನಮ್ಮ ಹುಮನಾಬಾದ ಮತಕ್ಷೇತ್ರ ಅಭಿವೃದ್ಧಿ ಆಗುತ್ತಿಲ್ಲ ಏಕೆಂದರೆ ತಾವು ಹುಮನಾಬಾದ ಮತಕ್ಷೇತ್ರ ಅಭಿವೃದ್ಧಿ ಪಡಿಸುವಲ್ಲಿ Busy ಇಲ್ಲಾ ನಿಮ್ಮ ಅಭಿವೃದ್ಧಿ ಮಾಡಿಕೊಳ್ಳುವಲ್ಲಿ Busy ಆಗಿದಿರಿ ಬಿ.ಎಸ್.ಎಸ್.ಕೆ ಕಾರ್ಖಾನೆ ಪ್ರಾರಂಭಿಸಲು ನಮ್ಮ ನಾಯಕರುಗಳಾದ ರಾಜಶೇಖರ.ಬಿ ಪಾಟೀಲ್, ಡಾ|| ಚಂದ್ರಶೇಖರ.ಬಿ ಪಾಟೀಲ್ ಹಾಗೂ ಭೀಮರಾವ.ಬಿ ಪಾಟೀಲ್ ರವರು ಕಾರ್ಖಾನೆ ಪ್ರಾರಂಭಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ನೀವು ಅದನ್ನು ಪ್ರಾರಂಭವಾಗದಂತೆ ನೋಡಿಕೊಳ್ಳಲು ಹಗಲಿರುಳು ಶ್ರಮಿಸುತ್ತಿದ್ದಿರಿ.
ಬಿ.ಎಸ್.ಎಸ್.ಕೆ ಕಾರ್ಖಾನೆ ರಾಜಶೇಖರ ಪಾಟೀಲ್ ರವರು ಶಾಸಕರಿದ್ದಾಗ ಅಂದಿನ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ರವರು ಹಾಗೂ ಕುಮಾರಸ್ವಾಮಿ ರವರ ಮೇಲೆ ಒತ್ತಡ ಹೇರಿ ಸುಮಾರು 30 ಕೋಟಿ ಅನುದಾನ ತಂದಿ ಕಾರ್ಖಾನೆ ಪ್ರಾರಂಭಿಸಿರುತ್ತಾರೆ.
“ನಿಮ್ಮ ಹತ್ರ ದಮ್ಮೂ ಇದ್ರೆ ತಾಕತ್ತು ಇದ್ರೆ” ವಿಶೇಷ ಅನುದಾನ ತಂದೆ ಕಾರ್ಖಾನೆ ಪುನಾರಂಭಮಾಡಿ ಎಂದು ನಾನು ಸವಾಲು ಹಾಕುತ್ತೇನೆ.
ಸುಮ್ಮನೆ ನರವಿಲ್ಲದ ನಾಲಿಗೆ ಎಂದು ಹೇಗೆ ಬೇಕಾದರು ಮಾತನಾಡಿದರೆ ನಡೆಯುವುದಿಲ್ಲಾ ನಿಮ್ಮ ಈ ಸುಳ್ಳು, ಹಾಗೂ ಜನರಿಗೆ ದಾರಿತಪ್ಪಿಸುವ ಹೇಳಿಕೆಗಳು ನೀಡುತ್ತಾ ನಾನು ಬಹಳ ಜಾಣನಿದ್ದೇನೆ ಎಂದು ತಿಳಿದುಕೊಂಡರೆ ನಿಮ್ಮಂತಹ ಮುರ್ಖ ಯಾರು ಇಲ್ಲಾ,
ಹುಮನಾಬಾದ ಮತಕ್ಷೇತ್ರದ ಜನರು ಹಾಗು ಅಧಿಕಾರಿಗಳು ಇಗಾಗಲೆ ನಿಮ್ಮ ಹಾಗೂ ನಿಮ್ಮ ಕುಟುಂಬದವರ ದುರಾಡಳಿತದಿಂದ ಪಾಠಕಲಿಸಲಿದ್ದಾರೆ. ಬೇಸತ್ತಿದ್ದಾರೆ ಬರುವಂತಹ ದಿನಗಳಲ್ಲಿ ನಿಮ್ಮಗೆ ತಕ್ಕ ಪಾಠ ಸಿಗಲಿದೆ,
ಹುಮನಾಬಾದ ಕ್ಷೇತ್ರದ ಜನರ ಕಷ್ಟ, ಸುಖದಲ್ಲಿ ನಮ್ಮ ಬಸವರಾಜ ಪಾಟೀಲ್ ಪರಿವಾರದವರು ಭಾಗಿಯಾಗುತ್ತಿರುವುದನ್ನು ಶಾಸಕರಿಗೆ ನೋಡಲು ಆಗುತ್ತಿಲ್ಲಾ.
ನಮ್ಮ ಪಕ್ಷದ ಪುರಸಭೆ ಅಧ್ಯಕ್ಷರ, ಉಪಾಧ್ಯಕ್ಷರ ಹಾಗೂ ಸದಸ್ಯರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲಾ ಅದು ನಮ್ಮ ಪಕ್ಷದ ವಿಷಯ ನಮ್ಮ ಪಕ್ಷಕ್ಕೆ ಬಿಟ್ಟಿದು.
ಕ್ಷೇತ್ರದ ಯುವಕರಿಗೆ ನೌಕರಿ ಕೋಡಿಸುತ್ತೇನೆ ಎಂದು ಸುಳ್ಳು ಹೇಳಿ ಮತ ಪಡೆದಿದ್ದಿರಿ ಜಾತಿ ಜಾತಿಗಳ ನಡೆವೆ ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಿರಿ. ಜನ ನಿಮಗೆ ತಕ್ಕ ಪಾಠ ಕಲಿಸಲು ತುದಿಗಾಲಲ್ಲಿ ನಿಂತಿದ್ದಾರೆ.
ಓಂಕಾರ ತುಂಬಾ ಅಧ್ಯಕ್ಷರು ಬ್ಲಾಕ್ ಕಾಂಗ್ರೇಸ್ ಸಮಿತಿ (ಗ್ರಾಮೀಣ) ಹುಮನಾಬಾದ.
ಅಹಮದ್ ಮೋಯಿನೋದ್ದಿನ್ (ಅಪ್ಪರ್) ಅಧ್ಯಕ್ಷರು ಬ್ಲಾಕ್ ಕಾಂಗ್ರೇಸ್ ಸಮಿತಿ (ನಗರ) ಹುಮನಾಬಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.