ವೈಜ್ಞಾನಿಕವಾಗಿ ದೇಶವನ್ನು ಮುನ್ನೆಡಸುವ ಸಲುವಾಗಿ ಮಾಹಿತಿ ತಂತ್ರಜ್ಞಾನ ಹಾಗೂ ಶಿಕ್ಷಣ ವ್ಯವಸ್ಥೆಯನ್ನು ಬಲಗೊಳಿಸಿದ ಮಾಜಿ ಪ್ರಧಾನಿಗಳಾದ ಶ್ರೀ ರಾಜೀವ್ ಗಾಂಧಿಯವರ ಪುಣ್ಯಸ್ಮರಣೆಯ ಈ ದಿನದಂದು ನಮ್ಮ ನಾಯಕರಿಗೆ ವಿನಮ್ರತೆಯಿಂದ ನಮನಗಳನ್ನು ಸಲ್ಲಿಸುತ್ತೇನೆ.
ಮನುಕುಲದ ಎಲ್ಲಾ ವರ್ಗಗಳ ನಡುವೆ ಶಾಂತಿ , ಸಾಮಾಜಿಕ ಸಾಮರಸ್ಯದ ವಿಚಾರಧಾರೆಗಳನ್ನು ಸ್ಥಾಪಿಸಲು ಮತ್ತು ಮಾನವೀಯ ಜೀವನ ಮೌಲ್ಯಗಳ ವಿರುದ್ಧ ಧಕ್ಕೆ ತರುವ ಮತ್ತು ಸಮಾಜದಲ್ಲಿ ಅಶಾಂತಿ ಮೂಡಿಸುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಹೋರಾಡುವ ಮೂಲಕ ಹಿಂಸೆ, ಅಸಹಿಷ್ಣುತೆಯನ್ನು ಹಿಮ್ಮೆಟ್ಟಿಸುವ ಮೂಲಕ ನಮ್ಮ ದೇಶದ ಮೂಲತತ್ವಗಳಾದ ಅಹಿಂಸೆ ಮತ್ತು ಸಹಿಷ್ಣುತೆಯ ಸಂಪ್ರದಾಯವನ್ನು ಪಾಲಿಸುವ ಪ್ರತಿಜ್ಞೆ ಮಾಡೋಣಾ.